ಭಾನುವಾರ, ಜನವರಿ 24, 2010

ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ !

ಕನ್ನಡ ಚಿತ್ರರಂಗ ಈ ದಶಕದಲ್ಲಿ ಕಂಡ ಪ್ರತಿಭಾನ್ವಿತ ನಟರಲ್ಲಿ ಸುದೀಪ್  ಒಬ್ಬರು. ಅವರ ಹುಚ್ಚ, ಮೈ ಆಟೋಗ್ರಾಫ್, ಶಾಂತಿನಿವಾಸ ಮುಂತಾದ ಚಿತ್ರಗಳ ಅಭಿನಯ ನನಗೆ ಇಷ್ಟವಾದದ್ದು. ಆದ್ರೆ ಬರೀ ರಿಮೇಕ್ ಚಿತ್ರಗಳಲ್ಲಿ ನಟಿಸ್ತಾರೆ ಅನ್ನೋ ಬೇಜಾರು ಕೊಂಚವಿತ್ತು. ಆದ್ರೆ ಈ ವರ್ಷ ಅವರು ಸ್ವಂತ ಕತೆಯೊಂದಿಗೆ ನಿರ್ದೇಶನ ಮಾಡಿರುವ "ಜಸ್ಟ್ ಮಾತ್ ಮಾತಲ್ಲಿ" ಸಿನೆಮಾ ಇನ್ನೇನು ಬಿಡುಗಡೆಯಾಗಲಿದೆ.

ರಘು ದೀಕ್ಷಿತ್, ರಮ್ಯಾ, ಸುದೀಪ್, ರಾಜೇಶ್ ಮುಂತಾದ ಪ್ರತಿಭಾನ್ವಿತರ ತಂಡವೇ ಚಿತ್ರಕ್ಕೆ ಕೆಲಸ ಮಾಡಿರುವಾಗ, ಜೊತೆಗೆ ಸುದೀಪ್ ನಿರ್ದೇಶವೂ ಇರೋದ್ರಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿರಬಹುದು ಅನ್ನುವ ನಿರೀಕ್ಷೆಯಂತೂ ಇದೆ. ಅದು ಅತ್ಲಾಗಿರಲಿ, ಈ ಸಿನೆಮಾದ ಹಾಡಿನ ಸಿ.ಡಿ ತಗೊಂಡು ಹಾಡು ಕೇಳ್ತಾ ಇದ್ದೆ. ರಘು ದೀಕ್ಷಿತ್ ಅವರ ಸಂಗೀತ ನಿಜಕ್ಕೂ ಮನಸೆಳೆಯುತ್ತೆ. ಎಲ್ಲ ಹಾಡುಗಳ ಸಾಹಿತ್ಯ, ಸಂಗೀತ ಎರಡೂ ಕೇಳೊಕೆ ಖುಷಿ ಕೊಡುತ್ತೆ. "ಈ ಕಣ್ಣಿನಲ್ಲಿ, ಕಣ್ ಚಿಪ್ಪಿನಲ್ಲಿ" ಅನ್ನೋ ಹಾಡನ್ನು ಕೇವಲ ರಘು ಮಾತ್ರ ಹಾಡಬಲ್ಲರು. ಅದು ಅವರ ಧ್ವನಿಗಿರೋ ವಿಶೇಷತೆ. "ನಿನ್ನ ಪೂಜೆಗೆ ಬಂದೆ ಮಹಾದೇಶ್ವರಾ" ಆದ ಮೇಲೆ ರಘು ಹಾಡಿರೋ ಸಕತ್ ಹಾಡಲ್ಲಿ ಇದು ಒಂದು ಅನ್ನಬಹುದು.

ಹಾಗೇ, ಈ ಚಿತ್ರದಲ್ಲಿ  ನಮ್ಮ ರಾಜೇಶ್ ಕೃಷ್ಣನ್ ಹಾಡಿರುವ ಈ ಹಾಡಿನ ಸಾಲುಗಳು ಒಂತರಾ ಸೆಳೆತ ಇದೆ.


"ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ
ಈ ಮನಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೇ ನೀನಾ?
ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕಾ?
ನೀರು ಜೇನಾಯ್ತು ಹೇಗೋ ನಾನು ಅರಿಯೆ, ಹೀಗೆ ಜಸ್ಟ್ ಮಾತ್ ಮಾತಲ್ಲಿ..

ಬಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೆ
ತಂಪಾದ ಮಂಜಿನ ಹನಿಯ ಮುತ್ತಿಕ್ಕೊ ಆಸೆಯ ಕಂಡೆ
ಪಯಣಕ್ಕೆ ಸವಿಯ ಸ್ನೇಹ ಸಿಕ್ಕಿದೆ ಇಲ್ಲಿ
ತೂರಿದೆ ನನ್ನ ಹೃದಯ ಬಾನಿನಲ್ಲಿ
ಕಣ್ಣಿಗೆ ಹಚ್ಚಿದೆ ನೀ ಪ್ರೇಮದ ಬಣ್ಣ,, ಹೀಗೆ ಜಸ್ಟ್ ಮಾತ್ ಮಾತಲ್ಲಿ..

ನನ್ನ ಉಸಿರಿಗೆ ನೀ ಸ್ವರವೇ, ಆ ಸ್ವರಕೆ ನಿನ್ನ ಹೆಸರು ಪದವೇ ? ||೨||
ಕೇಳಿದೆ ಕೋಗಿಲೆ, ಆ ಹಾಡು ಹಾಡಲೇ ? ಒಪ್ಪಿಗೆ ನಿನ್ನ ಕೇಳಿದೆ,, ||೨||
ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ
ಈ ಮನಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೇ ನೀನಾ?
 ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕಾ?
ನೀರು ಜೇನಾಯ್ತು ಹೇಗೋ ನಾನು ಅರಿಯೆ, ಹೀಗೆ ಜಸ್ಟ್ ಮಾತ್ ಮಾತಲ್ಲಿ.."

ಈ ಹಾಡನ್ನು ಬರೆದಿದ್ದು ರಘು ದೀಕ್ಷಿತ್ ಅನ್ನೋದು ಇನ್ನೊಂದು ವಿಶೇಷ. ಆನ್ ಲೈನ್ ಇಲ್ಲಿ ಕೇಳಬಹುದು. ಇಷ್ಟ ಆದಲ್ಲಿ, ಅಂಗಡಿಗೆ ಹೋಗಿ ಒಂದು ಸಿ.ಡಿ ಖರೀದಿ ಮಾಡಿ, ಕನ್ನಡ ಸಂಗೀತ ಉದ್ಯಮವನ್ನು ಬೆಂಬಲಿಸಬೇಕು ಅನ್ನೋದು ನನ್ನ ಕೋರಿಕೆ.

1 ಕಾಮೆಂಟ್‌:

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !