ಗುರುವಾರ, ನವೆಂಬರ್ 24, 2011

ರಾಹುಲ್ ಗಾಂಧಿ ಹೇಳಿಕೆ, ಅಂತರ್-ರಾಜ್ಯ ವಲಸೆ ಮತ್ತು ಕೆಲ ಇಂಗ್ಲಿಷ್ ಮಾಧ್ಯಮಗಳ ಇಬ್ಬಂದಿತನವೂ...

ಇತ್ತಿಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುಪಿಯಲ್ಲಿ ಮಾತನಾಡುತ್ತ "ಇನ್ನೆಷ್ಟು ದಿನ ಇದೇ ರೀತಿ ಉತ್ತರಪ್ರದೇಶದ ಯುವಕರು ಭಿಕ್ಷೆ ಕೇಳಿ ಮುಂಬೈನಂತಹ ಊರಿಗೆ ವಲಸೆ ಹೋಗುತ್ತಿರಿ?" ಅಂದರು. ಅಭಿವೃದ್ದಿಯಲ್ಲಿ ಉತ್ತರಪ್ರದೇಶ ಎಷ್ಟು ಹಿಂದೆ ಬಿದ್ದಿದೆ, ಅಲ್ಲಿನ ಯುವಕರಿಗೆ ಒಳ್ಳೆ ಜೀವನ, ದುಡಿಮೆ ಕಲ್ಪಿಸುವಲ್ಲಿ ಅದೆಷ್ಟು ಎಡವಿದೆ, ಅಲ್ಲಿನ ಯುವಕರೆಲ್ಲ ಅನ್ನ ಅರಸಿ ಮುಂಬೈ, ದೆಹಲಿ, ಬೆಂಗಳೂರಿನಂತಹ ಹಸಿರು ಹುಲ್ಲುಗಾವಲಿಗೆ ವಲಸೆ ಹೋಗದೇ ವಿಧಿಯಿಲ್ಲ ಅನ್ನುವಂತೆ ಅಲ್ಲಿನ ಆಡಳಿತ ಹೇಗೆ ಮಾಡಿದೆ ಅನ್ನುವುದನ್ನು ಒಂದು ರೀತಿಯಲ್ಲಿ ಎಲ್ಲರ ಎದುರಿಟ್ಟರು. ಅಲ್ಲಿ ತಮ್ಮ ಪಕ್ಷಕ್ಕೆ ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಈ ಮಾತನ್ನು ಅವರು ಹೇಳಿದ್ದರೂ, ಅವರು ಎತ್ತಿರುವ ಪ್ರಶ್ನೆ ಮಾತ್ರ ಎಲ್ಲರೂ ಯೋಚಿಸಬೇಕಾದಂತದ್ದೇ. ಅವರ ಮಾತನ್ನು ಸಹಜವಾಗಿಯೇ ಕೆಲವು ವಲಸೆ ಪರವಾಗಿರುವವರು ವಿರೋಧಿಸಿದರು. ಮೈಸೂರಿನ ಒಂದು ಪ್ರಖ್ಯಾತ ಇಂಗ್ಲಿಷ್ ಬ್ಲಾಗ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ಗಾಂಧಿ ಈ ಮಾತಿನ ಮೂಲಕ ಅವರಿಗೂ ಮರಾಠಿಗರ ಹಿತಕ್ಕಾಗಿ ಧ್ವನಿ ಎತ್ತುವ ಎಮ್.ಎನ್.ಎಸ್ ಮತ್ತು ಕನ್ನಡಿಗರ ಹಿತಕ್ಕಾಗಿ ಹೋರಾಡುವ ಕರವೇಗೂ ಯಾವುದೇ ಅಂತರವಿಲ್ಲ ಎಂದು ತೋರಿಸಿದ್ದಾರೆ ಎಂದು ಪ್ರತಿಪಾದಿಸುವ ಅಂಕಣವೊಂದನ್ನು ಪ್ರಕಟಿಸಿತು ಮತ್ತು ಆ ಬಗ್ಗೆ ಚರ್ಚೆಯಾಗಲಿ ಎಂದು ತಮ್ಮ ಅನಿಸಿಕೆ ಬರೆದ ಅನೇಕ ಗೆಳೆಯರ ಅನಿಸಿಕೆಯನ್ನು ಪ್ರಕಟಿಸಲೂ ಇಲ್ಲ. ಇರಲಿ, ಪ್ರಜಾತಂತ್ರದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ತಿಳಿಸುವ ಎಲ್ಲ ಆಯ್ಕೆಯಿದೆ. ಆದರೆ ತಮ್ಮ ಅನ್ನ, ಕಲಿಕೆ, ದುಡಿಮೆ, ಬಾಳುವೆಗಾಗಿ ಧ್ವನಿ ಎತ್ತುವ ಯಾವುದೇ ಸಂಸ್ಥೆ, ಸಂಘಟನೆಯನ್ನು ಈ ಹೊತ್ತಿನ ಹಲ ಮಾಧ್ಯಮಗಳು, ಬುದ್ದಿಜೀವಿಗಳು ನೋಡುವ ರೀತಿ, ಸಂಕುಚಿತ, ಮೂಲಭೂತವಾದಿಗಳು ಎಂದೆಲ್ಲ ಮಾಡಲಾಗುವ ಟೀಕೆಗಳು, ತಮ್ಮ ಹಕ್ಕಿಗಾಗಿ ನಡೆಯುವ ಹೋರಾಟವನ್ನು ಟ್ರಿವಿಯಲೈಸ್ ಮಾಡುವುದನ್ನು ಗಮನಿಸಿದಾಗ ಅನಿಯಂತ್ರಿತ ವಲಸೆ, ಅದರಿಂದಾಗುವ ಡೆಮಾಗ್ರಾಫಿಕ್ ಬದಲಾವಣೆಗಳು, ವಲಸೆಗೆ ಪ್ರೋತ್ಸಾಹ ನೀಡುವ ಭಾಷಾ ನೀತಿ, ತಪ್ಪು ಜನಸಂಖ್ಯಾ ನೀತಿ, ಇವೆಲ್ಲದರಿಂದ ದೇಶದ ವೈವಿಧ್ಯತೆಗೆ ತಗಲುತ್ತಿರುವ ಅಪಾಯ ಮತ್ತು ಅದರಿಂದ ಮುಂದಾಗಬಹುದಾದ ಪರಿಣಾಮಗಳನ್ನು ಈ ಜನರು ಯೋಚಿಸುತ್ತಿಲ್ಲವೆನೋ ಎಂದು ನನ್ನ ಅನಿಸಿಕೆ. ನನ್ನ ಮಾತುಗಳಿಗೆ ಕೆಲವು ಸಮರ್ಥನೆಯನ್ನು ಈ ಕೆಳಗೆ ನೀಡಲು ಬಯಸುತ್ತೇನೆ.

ಉತ್ತರ ಪ್ರದೇಶದ ಯುವಕರಿಗೆ ಕೆಲಸ ಕೊಡಬೇಕಾದದ್ದು ಯಾರು? ಉತ್ತರ ಪ್ರದೇಶವೋ, ಇಲ್ಲ ಮಹಾರಾಷ್ಟ್ರ, ಕರ್ನಾಟಕವೋ?
ಉತ್ತರ ಪ್ರದೇಶದ ಸರ್ಕಾರವಿರುವುದು ಯಾರ ಏಳಿಗೆಗಾಗಿ? ಅಲ್ಲಿನ ಸಂಪತ್ತು, ಸಂಪನ್ಮೂಲ ಬಳಸಿ ಅಲ್ಲಿನ ಜನರಿಗೆ ದುಡಿಮೆ, ಬದುಕಿನ ಅವಕಾಶಗಳನ್ನು ಕಲ್ಪಿಸಲೆಂದೇ ಅಲ್ಲಿನ ಸರ್ಕಾರವಿರುವುದಲ್ಲವೇ? ಜನರಿಗೆ ಒಳ್ಳೆಯ ಆಡಳಿತ ನೀಡದೇ ಜನರು ವಲಸೆ ಹೋಗಲು ಅನುಕೂಲವಾಗುವಂತೆ ರೈಲಿನ ಮೇಲೆ ರೈಲು ಬಿಟ್ಟು ಜನರನ್ನು ಹೊರ ರಾಜ್ಯಕ್ಕೆ ತಳ್ಳುವಂತದ್ದನ್ನೇ ಆಡಳಿತ ಎಂಬಂತೆ ನಡೆದುಕೊಂಡರೆ ಅಂತಹ ವೈಫಲ್ಯತೆಯನ್ನು ಪ್ರಶ್ನಿಸುವುದು ಯಾವ ರೀತಿಯಲ್ಲಿ ಸಂಕುಚಿತ ಇಲ್ಲವೇ ಮೂಲಭೂತವಾದವಾಗುತ್ತೆ? ಇದು ಭಾರತ, ಯಾರು ಎಲ್ಲಿ ಬೇಕಾದರೂ ವಲಸೆ ಹೋಗಬಹುದು ಅನ್ನುವ ಮಾತನ್ನೇ ಆಡಿಕೊಂಡು ಎಲ್ಲೆಂದರಲ್ಲಿ ವಲಸೆ ಹೋಗಿ ಅಲ್ಲಿನ ಸ್ಥಳೀಯರ ಉದ್ಯೋಗ, ಬದುಕು, ಸ್ಥಳೀಯತೆಯ  ಹಕ್ಕುಗಳಿಗೆ ತೊಂದರೆ ಆದಾಗ ಅಲ್ಲಿ ನೂರಾರು ಕಾಲದಿಂದ ನೆಲೆಸಿರುವ ಸ್ಥಳೀಯ ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಯಾವ ರೀತಿಯಲ್ಲಿ ಸಂಕುಚಿತ ಇಲ್ಲವೇ ಮೂಲಭೂತವಾದವಾಗುತ್ತೆ? ವಿವಿಧತೆಯಲ್ಲಿ ಏಕತೆ ಎಂದು ಕಟ್ಟಿರುವ ಈ ದೇಶದಲ್ಲಿ ಎಲ್ಲ ಭಾಷಿಕರು ಈ ಒಕ್ಕೂಟವನ್ನು ಸೇರಿದ್ದು ಎಲ್ಲರಿಗೂ ಸಮ ಬಾಳು, ಸಮ ಪಾಲು ದೊರಕಲಿ ಅನ್ನುವ ಕಾರಣಕ್ಕಲ್ಲವೇ? ಹಾಗಿದ್ದಲ್ಲಿ, ಆ ನಂಬಿಕೆಗೆ ತೊಂದರೆ ಆದಾಗ ಅದನ್ನು ಪ್ರಶ್ನಿಸಿದರೆ ಅದನ್ನು ಸಂಕುಚಿತ, ಮೂಲಭೂತವಾದ ಅನ್ನುವ ಹಲವು ಬುದ್ದಿಜೀವಿಗಳಿಗೆ ನನ್ನದೊಂದು ಸರಳ ಉದಾಹರಣೆ ಸಮೇತ ಪ್ರಶ್ನೆ. ಎರಡು ವರ್ಷದ ಹಿಂದೆ ರೈಲ್ವೆ ಇಲಾಖೆಯ ಗ್ರೂಪ್ ಡಿ ಹಂತದ ೪೭೦೦ ಹುದ್ದೆಗಳನ್ನು ಕನ್ನಡಿಗರಿಗೆ ಗೊತ್ತೂ ಆಗದಂತೆ ಬಿಹಾರಿಗಳ ಪಾಲಾಗಿಸುವ ಯತ್ನ ನಡೆದಾಗ ಅದನ್ನು ತಡೆದು ನ್ಯಾಯ ಸಿಗುವಂತೆ ಮಾಡಿದ್ದು ಯಾರು? ಕನ್ನಡ ಪರ ಸಂಘಟನೆಗಳೋ ಇಲ್ಲ ಕೂತು ತೋಚಿದ್ದು ಬರೆಯುವ  ಇಂತಹ ಮಾಧ್ಯಮಗಳೋ? ಸಹಜವಾಗಿ ಜನರ ಬದುಕಿನ ಈ ಪ್ರಶ್ನೆಯನ್ನು ಎತ್ತಿಕೊಂಡು ಅವರಿಗೆ ನ್ಯಾಯ ದೊರಕಿಸುವ ಕೆಲಸ ಈ ಮಾಧ್ಯಮಗಳು ಯಾಕೆ ಮಾಡಲಿಲ್ಲ? ಯಾಕೆ ಕನ್ನಡ ಪರ ಸಂಘಟನೆಗಳು ಬೇಕಾದವು?

ಅನಿಯಂತ್ರಿತ ವಲಸೆಗೆ ಇಂಬು ಕೊಡುತ್ತಿರುವ ಹುಳುಕಿನ ಭಾಷಾ ನೀತಿ
ಇವತ್ತು ಅನಿಯಂತ್ರಿತ ವಲಸೆ ಮುಂಬೈ, ಬೆಂಗಳೂರಿನಂತಹ ಊರಿಗಾಗುತ್ತಿದ್ದಲ್ಲಿ ಅದಕ್ಕೆ ಬಹು ದೊಡ್ಡ ಕಾರಣ ಭಾರತದ ಹುಳುಕಿನ ಭಾಷಾ ನೀತಿ. ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳಿನಡಿ ಕಲಿಕೆ, ಮನರಂಜನೆ, ಆಡಳಿತ,ಉದ್ಯೋಗ ಹೀಗೆ ಎಲ್ಲ ರೂಪದಲ್ಲೂ ಹಿಂದಿಯನ್ನು ಹೇರಿ ಎಲ್ಲೆಡೆ ಹಿಂದಿಗೆ ಮಾನ್ಯತೆ ದೊರಕಿಸುವಂತಹ ಭಾಷಾ ನೀತಿಯಿಂದಾಗಿಯೇ ಇಂದು ಎಲ್ಲೆಡೆ ಹಿಂದಿ ಭಾಷಿಕರ ವಲಸೆ ಅಂಕೆಯಿಲ್ಲದೇ ನಡೆಯುತ್ತಿದೆ. ನೀವೇ ಗಮನಿಸಿ, ಬೆಂಗಳೂರು ಇಲ್ಲ ಮುಂಬೈಗೆ ಬರುವ ಹಿಂದಿ ಭಾಷಿಕನಿಗೆ ಇವತ್ತು ಒಂದಿನಿತಾದರೂ ತೊಡಕಾಗುತ್ತಿದೆಯೇ? ಸ್ಥಳೀಯ ನುಡಿಯ ಒಂದೇ ಒಂದು ಪದ ಕಲಿಯದೇ ಬದುಕಿ, ಬಾಳುವಂತಹ ವ್ಯವಸ್ಥೆ ಕಲ್ಪಿಸಿರುವುದರಿಂದಲೇ ಇವತ್ತು ಈ ಪಾಟಿ ವಲಸೆಯಾಗುತ್ತಿದೆಯಲ್ಲವೇ? ಇಂತಹ ವಲಸೆಯಿಂದಲೇ ಬೆಂಗಳೂರಿನ ಸರ್ಜಾಪುರ, ಮಾರ್ತಹಳ್ಳಿಯಂತಹ ಕೇವಲ ೨೦ ವರ್ಷಗಳ ಹಿಂದೆ ಅಪ್ಪಟ ಕನ್ನಡದವಾಗಿದ್ದ ಹಳ್ಳಿಗಳಲ್ಲಿ ಇವತ್ತು ಕನ್ನಡದ ಧ್ವನಿ ಉಡುಗಿ ಹೋಗುವ ಹಂತ ತಲುಪಿರುವುದು? ಯಾವ ವಲಸೆ ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಅಳಿಸುವಂತದ್ದೋ ಅಂತಹ ವಲಸೆ, ಅದಕ್ಕೆ ಇಂಬು ಕೊಡುವ ಭಾಷಾ ನೀತಿಯ ಬಗ್ಗೆ ಯಾರು ಧ್ವನಿ ಎತ್ತಬೇಕಿತ್ತು? ಇಂತಹ ಮಾಧ್ಯಮಗಳೇ ಅಲ್ಲವೇ? ಆದರೆ ಅಲ್ಲಿನ ಕೆಲ ಜನರಿಗೆ ಇವತ್ತು ಅದಾವುದು ಮುಖ್ಯವಲ್ಲ. ಜನಸಾಮಾನ್ಯರಿಂದ, ಅವರ ನಾಡಿಮಿಡಿತದಿಂದ ಬೇರ್ಪಟ್ಟಿರುವ ಈ ಜನರು, ಸಂಸ್ಥೆಗಳು ಈ ಜನರ ಪರವಾಗಿ ಧ್ವನಿ ಎತ್ತುವವರನ್ನು ಸಂಕುಚಿತ ಮನಸ್ಸಿನ ಮೂಲಭೂತವಾದಿಗಳು ಎಂದು ಟೀಕಿಸುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಮತ್ತು ಆ ಮೂಲಕ ತಾವು ಒಂದು ರೀತಿ ತೂಗು ಕುರ್ಚಿಯ ಬುದ್ದಿಜೀವಿಗಳೆಂದು ತೋರಿಸಿಕೊಂಡಿದ್ದಾರೆನ್ನಬಹುದು. ಧರ್ಮದ ವೈವಿಧ್ಯತೆಗೆ ಯಾವುದೇ ತೊಡಕಾಗುವುದನ್ನು ಉಗ್ರವಾಗಿ ಖಂಡಿಸುವ ಈ ಮಾಧ್ಯಮಗಳು ಭಾಷಾ ವೈವಿಧ್ಯತೆಯ ವಿಷಯಕ್ಕೆ ಬಂದಾಗ ಮಾತ್ರ ಯಾಕೆ ಸಂಕುಚಿತತೆಯ ರಾಗ ಎಳೆಯುವುದು? ವೈವಿಧ್ಯತೆ ಯಾವುದಿದ್ದರೂ ಅದು ವೈವಿಧ್ಯತೆಯೇ ಅಲ್ಲವೇ? ಯಾಕೀ ಈ ಇಬ್ಬಂದಿತನ ಹಾಗಿದ್ದರೆ?

ಜನಸಂಖ್ಯಾ ನೀತಿ ತರುತ್ತಿರುವ ಆತಂಕ !
ಮೇಲಿನ ಮಾತೆಲ್ಲ ಒಂದು ತೂಕವಾದರೆ, ಇವತ್ತು ಭಾರತ ಅನುಸರಿಸುತ್ತಿರುವ ಜನಸಂಖ್ಯಾ ನೀತಿ ತಂದಿರುವ ಆತಂಕ ಇನ್ನೊಂದು ತೂಕದ್ದು. ನಮ್ಮ ಕರ್ನಾಟಕದ ಜನಸಂಖ್ಯೆ ಇಂದು ಸುಮಾರು ೬ ಕೋಟಿಯ ಆಸುಪಾಸಿನಲ್ಲಿದೆ. ಆದರೆ ಕರ್ನಾಟಕದಲ್ಲಿ ಇನ್ನು ಮುಂದೆ ಮಕ್ಕಳ, ಯುವಕರ ಸಂಖ್ಯೆಯ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. ೨೦೧೧ರ ಜನಸಂಖ್ಯೆಯ ಆಧಾರದಲ್ಲಿ ಕರ್ನಾಟಕ ಈಗಾಗಲೇ ತನ್ನ ರಿಪ್ಲೇಸ್-ಮೆಂಟ್ ಅನುಪಾತವಾದ TFR=2.0 ಅನ್ನು ತಲುಪಿದೆ. (TFR ಅಂದರೆ Total Fertility Rate- ಯಾವುದೇ ಜನಾಂಗ ಅಳಿಯದೇ ಉಳಿಯಲು ಇರಬೇಕಾದ ಜನಸಂಖ್ಯೆ ಬೆಳವಣಿಗೆಯ ಪ್ರಮಾಣ). ಆದರೆ 11ನೇ ಪಂಚವಾರ್ಷಿಕ ಯೋಜನೆ ಅನ್ವಯ ಭಾರತ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ TFR ಟಾರ್ಗೆಟ್ 1.8. ಇದರರ್ಥ ಕರ್ನಾಟಕದ TFR ಮಟ್ಟ ಈಗ ತಲುಪಿರುವ ನಾರ್ಮಲ್ ರಿಪ್ಲೇಸ್-ಮೆಂಟ್ ಮಟ್ಟದಿಂದಲೂ ಕೆಳಗಿಳಿದು ಕುಸಿಯುತ್ತ ಸಾಗುತ್ತೆ. ಅದರಿಂದಾಚೆ, ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡ ಜನಾಂಗದ ಸಂಖ್ಯೆ ಇಳಿಮುಖವಾಗುತ್ತ ಹೋಗುವುದು. ಇದೇ ಸಮಯದಲ್ಲಿ ಬಿಹಾರ್, ಉತ್ತರ ಪ್ರದೇಶದಂತಹ ರಾಜ್ಯಗಳ TFR ಮಟ್ಟ 3.0ಕ್ಕಿರುತ್ತೆ. ಅಲ್ಲಿ ಜನಸಂಖ್ಯೆ ಹೆಚ್ಚಿದರೆ, ಇಲ್ಲಿ ಇಳಿಮುಖ ! ಪರಿಣಾಮ? ತಗ್ಗಿರುವ ಜಾಗಕ್ಕೆ ನೀರು ಹರಿವಂತೆ ನಿರಂತರವಾಗಿ ವಲಸೆ ಹೆಚ್ಚುವುದು. ಅಂತಹ ವಲಸೆಗೆ ಇಂಬು ಕೊಡುವ ಭಾಷಾ ನೀತಿಯೂ ಈಗಾಗಲೇ ಇಲ್ಲಿದೆ ಅಂದ ಮೇಲೆ ಪರಿಣಾಮ ಊಹಿಸುವುದು ಕಷ್ಟವೇ? ಇಂತಹ ಕಟ್ಟೆಯೊಡೆದ ವಲಸೆಯ ಪ್ರವಾಹಕ್ಕೆ ಸಿಕ್ಕುವ ಕನ್ನಡ, ಕನ್ನಡಿಗನಿಗೆ ಕೊನೆಗೇನು ಉಳಿವುದು? ಒಂದು ಭಾಷಾ ಸಮೂಹದ ಅಸ್ತಿತ್ವವನ್ನೇ ಕಿತ್ತು ಹಾಕಬಹುದಾದ ಇಂತಹ ತೊಂದರೆಗಳ ಬಗ್ಗೆ ಮಾತನಾಡಬೇಕಾದದ್ದು ಯಾರು? ಇದೇ ಮಾಧ್ಯಮವಲ್ಲವೇ? ಆದರೆ ಅವರಿಗೆ ಇಂತಹ ಶ್ರಮದ ಕೆಲಸವಾವುದು ಬೇಡ. ತುರಿಕೆ ಆದಾಗ ಕೆರೆದುಕೊಳ್ಳುವಂತೆ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವವರು parochial, fanatic, fringe elements ಎಂದು ಜರಿದು ತಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ. 
ಜನರಿಗೋಸ್ಕರ ಸಂವಿಧಾನವಿರುವುದು
ಸಂವಿಧಾನದಲ್ಲಿ ಅಂತರ್-ರಾಜ್ಯ ವಲಸೆಯ ಬಗ್ಗೆ ಏನು ಹೇಳಿಲ್ಲ. ಯಾರೂ ಎಲ್ಲಿಗೆ ಬೇಕಾದರೂ ಹೋಗಬಹುದು ಅನ್ನುವವರು ಅರ್ಥ ಮಾಡಿಕೊಳ್ಳಬೇಕಿರುವುದು ಒಂದಿದೆ. ಸಂವಿಧಾನವೆನ್ನುವುದು ಇರುವುದು ಜನರಿಗಾಗಿ. ಜನರ (ಯಾರೋ ಒಂದು ಭಾಷಿಕ ಜನರಲ್ಲ, ಎಲ್ಲ ಭಾಷಿಕರು) ಒಳಿತಿಗಾಗಿ ಸಂವಿಧಾನವನ್ನು ತಿದ್ದುವ ಕೆಲಸ ಮಾಡಿದರೆ ತಪ್ಪಿಲ್ಲ. ಮಿತಿ ಮೀರಿದ ವಲಸೆಯಿಂದ ಮುಂಬೈ ಅನ್ನುವುದು ಕೊಳಗೇರಿಯ ನಗರವಾಗಿದೆ ಅಲ್ಲಿನ ಮೂಲಭೂತ ಸೌಕರ್ಯವೆಲ್ಲವೂ ಹಳಿತಪ್ಪಿವೆ ಅನ್ನುವುದು ಅಲ್ಲಿಯ ಜನರ ಅನಿಸಿಕೆ. ಬೆಂಗಳೂರಿನಂತಹ ಊರಲ್ಲೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ದೊಡ್ಡ ಮಟ್ಟದಲ್ಲೇ ಎಲ್ಲರನ್ನೂ ಕಾಡುತ್ತಿವೆ. ವಲಸೆಯನ್ನು ನಿಯಂತ್ರಿಸುವ, ಆಯಾ ನಾಡಿನ ಸ್ಥಳೀಯತೆ, ಬದುಕು, ಸಂಸ್ಕೃತಿ ಮೂರಾಬಟ್ಟೆ ಮಾಡುವಂತಹ ವಲಸೆಯನ್ನು ನಿಯಂತ್ರಿಸುವ ಹಕ್ಕು ಪ್ರತಿ ರಾಜ್ಯಕ್ಕೂ ಕೊಡುವ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯಲು ಇದು ಸಕಾಲ. ಅದು ಬಿಟ್ಟು ಮಾತೆತ್ತಿದರೆ ಸಂವಿಧಾನದ ಹೆಸರು ಹೇಳಿ ಏನು ಮಾಡೋಕಾಗಲ್ಲ ಎಂದು ಕೈ ಚೆಲ್ಲುವ ಧೋರಣೆ ಬಿಡಲು ವಲಸೆಯಿಂದ ತತ್ತರಿಸಿರುವ ರಾಜ್ಯಗಳೆಲ್ಲ ಮುಂದಾಗಬೇಕಿದೆ.

ಕೊನೆಹನಿ: ಸರಿಯಾದ ಮಾಧ್ಯಮವಾಗಿದ್ದರೆ " ಹೌದು, ರಾಹುಲ್ ಗಾಂಧಿ ಹೇಳಿದ್ದು ಸರಿಯಿದೆ.ಪ್ರತಿ ರಾಜ್ಯವೂ ತನ್ನ ಏಳಿಗೆಗೆ ದುಡಿಯಬೇಕು. ಪ್ರತಿ ರಾಜ್ಯದ ಸರ್ಕಾರವೂ ಅಲ್ಲಿನ ಜನರ ಹಿತ ಕಾಯಲೆಂದೇ ಅಧಿಕಾರಕ್ಕೆ ಬಂದಿರುವುದು, ಅಲ್ಲಿನ ಜನರಿಗೆ ದುಡಿಮೆ, ಬದುಕು ರೂಪಿಸುವ ಕೆಲಸ ಮಾಡಬೇಕು. ಪ್ರತಿ ರಾಜ್ಯದ ಅನನ್ಯತೆ, ಸಂಸ್ಕೃತಿ, ನುಡಿ, ಬದುಕು ಎಲ್ಲವೂ ಉಳಿಯಬೇಕು, ಅದಕ್ಕೆ ಮಾರಕವಾಗುವ ವಲಸೆಗೆ ನಿಯಂತ್ರಣವಿರಬೇಕು" ಎಂದು ಮಾತಾಡುತ್ತಿದ್ದರೋ ಇಲ್ಲವೇ "ಇಂತಹ ಹೇಳಿಕೆ ಮೂಲಕ ಮೂಲಭೂತವಾದಿಗಳಿಗೂ ಇವರಿಗೂ ಯಾವ ಅಂತರವೂ ಇಲ್ಲ" ಅನ್ನುವ ಬಾಲಿಶವಾದ ಮಾತಾಡುತ್ತಿದ್ದರೋ ನೀವೇ ಊಹಿಸಿ.

5 ಕಾಮೆಂಟ್‌ಗಳು:

  1. ಈ ಕಮೆಂಟಿನಲ್ಲಿ ಅದೇನ್ ತಪ್ಪಿದೆಯೋ ಗೊತಿಲ್ಲ. ಅದನ್ನ ಮಹಾನುಭಾವರು ಬಿಡಲೇ ಇಲ್ಲ.

    What has Rahul Gandhi’s pro-poor people’s stance got to do with a pro-kannada organization, KRV in Karnataka.
    The author has unwantedly and irrationally brought KRV into the discussion. Anyways, the author is aware of the fact that both MNS and KRV spearhead the political movements in Maharashtra and karnataka on the basis of linguistic votes.
    Now, with the example quoted about Karave putting a check on railway recruitment, here is my take:

    1. Till Karnataka Rakshana Vedike took the railway recruitment battle in a big way, the exams from the railways were being conducted only in English and Hindi. Does it mean, people not knowing these languages are not Indians? What KRV did was to make the central government and the railways department realize that India has many other regional languages and for equality to prevail, exams for positions open in Karnataka must be conducted in kannada and rectruitment for open positions in Punjab must be conducted in Punjabi and so on.
    When Mamatha Banerjee took charge as Railway minister, she considered the request and now, railway board exams happen in all constitutionally approved languages

    2. When Laloo was the Railway minister, he used to send Biharis in trains for free of cost to Karnataka..You know what..They were being sent to appear for railway board exams for the Karnataka region, which falls under the South-Western railways.
    And the recuitment was not for any highly skilled position but it was for the D Group which comprises.

    Laloo was of the impression or was focussing to fill biharis even in such unskilled positions, and now, the author of this article sounds like a Laloo sympathizer who is questioning KRV’s stance of getting Kannadigas, jobs in Karnataka which is how it should be as per the constitution and democracy.

    ಪ್ರತ್ಯುತ್ತರಅಳಿಸಿ
  2. Very well written... you have really exposed Churumuri blog's double standard approach. I tried putting this comment, but they did not allow.

    "The author of this article is definitely biased towards downplaying the Congress government, with a pretension of questioning Rahul Gandhi’s worldview.

    The author goes beyond this to even compare with KRV, MNS stance of migration. What the author misses is an objective mind frame of understanding the ill-effects of uncontrolled migration. Whether it is between states or within states, migration is a natural economic activity that is bound to happen. It only become alarming when it gets uncontrolled, when it gets facilitated politically by playing with public policies.

    Organizations like KRV and MNS definitely have their role to play in pressurizing the government, spreading public awareness about uncontrolled migration, sometimes even agitating to avoid the ill-effects of it. If the government was sensible to think and act upon, realizing the migration effect on employment opportunities for locals, demographic dysfunctions that could be caused, and economic stratification in the fundamental sectors like education, then there was no need for activists like KRV and MNS men. But, the truth is known to everyone.

    Going by author’s theory of “flat world”, why only limit to India or states within India, why not extend our vision to worldly view of allowing neighboring countries to carry out organized migration? It’s a flat, global world and would Americans or Chinese extend a similar solution to address unemployment issues?"

    ಪ್ರತ್ಯುತ್ತರಅಳಿಸಿ
  3. ವಸಂತ್, ಅಮರ್, ರಮೇಶ್ ಅವರೇ ಕರ್ನಾಟಕದ ಬುದ್ದಿಜೀವಿಗಳ(?) ಇಬ್ಬಂಗಿತನವನ್ನು ಸರಿಯಾಗಿ ತೆರೆದಿಟ್ಟಿದ್ದೀರಿ.
    ನನ್ನದೊಂದು ಕೋರಿಕೆ, ಕರವೇ ಯನ್ನು ಎಮ್.ಎನ್.ಎಸ್ ಗೆ ಹೋಲಿಸುವುದು ಬೇಡ.
    ಎಮ್.ಎನ್.ಎಸ್ ರಾಜಕೀಯ ಉದ್ದೇಶಕ್ಕಾಗಿಯಷ್ಟೇ ಇರುವುದು ಆದರೆ ಕರವೇಯು ಜನಪರ/ಕನ್ನಡಪರ ಗುರಿಗಳನ್ನು ಹೊಂದಿದೆ ಎಂದು ನನಗೆ ಅನಿಸುತ್ತದೆ.
    ಜೊತೆಗೆ ಎಮ್.ಎನ್.ಎಸ್ ನ ಹಿಂಸಾತ್ಮಕ ನಡುವಳಿಕೆಗೂ, ಕರವೇಯ ಬಿರುಸಿನ/ಗಟ್ಟಿತನದ ಹೋರಾಟಕ್ಕೂ ತುಂಬಾ ವ್ಯತ್ಯಾಸವಿದೆ.

    ಪ್ರತ್ಯುತ್ತರಅಳಿಸಿ
  4. buddijeevigalu suddili irodakke sada enaadrondu kyaate tegitaane irtaare. aniyantrita valaseyannu tadeyalu idu sakkala. Kevala nagara, mahanagaragala belavanigege maatra mahatvakodade halligala kadegoo namma ghana sarkaaragalu gamana harisi alli duiva kaigalige udyooga, nirgatikarige vasati, shikshana muntaada moolabhoota soukaryagalanna hechchisuvatta gamana kodabekide.

    kendra sarkaara da tribhaasha neetiya hinde sthaleeya bhaashegalanna hanta hanta vaagi nirnaama maaduvantha hunnara irabahudu....idella hindi bhaasheyavaru deshada yaavude bhaagadalladru hogi irlikkagiye maadiruva vyavashte eno ennuva anumaana huttute. Bhaarata halavu bhaashegala samskrutigala upasamskrutigala naadu idu heege ulibeeku annode aadre..hindi herikeyanna nillisabeku,,,

    ಪ್ರತ್ಯುತ್ತರಅಳಿಸಿ
  5. ಸ್ಥಾಪಿಸಬಯಸುವ ಯಾವುದೇ ಕೈಗಾರಿಕೆ, ಕೃಷಿ, ಶಿಕ್ಷಣ, ಆರೋಗ್ಯ ಮುಂತಾದ ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಬಹುಪಾಲನ್ನು ರಾಜ್ಯದ ಜನರಿಗೇ ನೀಡಬೇಕೆಂದು ಸರ್ಕಾರಗಳು ಷರತ್ತು ಹಾಕಬೇಕಾದ ಅಗತ್ಯವಿದೆ
    ಕನ್ನಡ ಓದಿದರೆ ಉದ್ಯೋಗ ಸಿಗುವಂಥ ಪರಿಸ್ಥಿತಿ ನಿರ್ಮಾಣವಾದರೆ ಸಹಜವಾಗಿ ಕನ್ನಡವೂ ಬೆಳೆಯುತ್ತದೆ. ಅಂಥ ಪರಿಸ್ಥಿತಿ ನಿರ್ಮಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಬೇಕು. ಇದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !