ಬುಧವಾರ, ಅಕ್ಟೋಬರ್ 9, 2013

ಹೈದರಾಬಾದ್ ಕರ್ನಾಟಕಕ್ಕೂ ರಾಜ್ಯಪಾಲರಿಗೂ ಏನ್ ಸಂಬಂಧ?

ಹಳೆ ಮಾತು: ಇಮಾಮ್ ಸಾಬಿಗೂ ಗೋಕುಲಾಶ್ಟಮಿಗೂ ಏನ್ ಸಂಬಂಧ?
ಹೊಸ ಮಾತು: ಹೈದರಾಬಾದ್ ಕರ್ನಾಟಕಕ್ಕೂ ರಾಜ್ಯಪಾಲರಿಗೂ ಏನ್ ಸಂಬಂಧ?

ವಿಶಯ ಏನಂದ್ರೆ, ಹೈದರಾಬಾದ್ ಕರ್ನಾಟಕಕ್ಕೆ ಕೊಡಲಾಗಿರುವ 371ಜೆ ವಿಧಿಯ ಅನುಷ್ಟಾನದ ಮೇಲ್ವಿಚಾರಣೆ ನಡೆಸುವ ಅಭಿವೃದ್ದಿ ಮಂಡಳಿಗೆ ರಾಜ್ಯಪಾಲರು ಅಧ್ಯಕ್ಷರಂತೆ ! ರಾಜ್ಯಪಾಲರು ಕರ್ನಾಟಕದ ಜನರಿಂದ ಆಯ್ಕೆಯಾದವರಾ? ಹೈದರಾಬಾದ್ ಕರ್ನಾಟಕ ಭಾಗದವರಾ? ಅಲ್ಲಿಯ ಸಮಸ್ಯೆಗಳ ಬಗ್ಗೆ ಅರಿತವರಾ? ಇದಾವುದು ಅಲ್ಲದಿರುವಾಗ ಈ ಮಂಡಳಿಯ ನಾಯಕತ್ವ  ಉತ್ತರಪ್ರದೇಶದಿಂದ ಬಂದ ರಾಜ್ಯಪಾಲರಿಗೆ ಕೊಡುವುದು ಪ್ರಜಾಪ್ರಭುತ್ವದ ಅಣಕವೇ ಸರಿ. ಹೈದರಾಬಾದ್ ಕರ್ನಾಟಕದಲ್ಲಿ ಇನ್ನು ಮೇಲೆ ಕರ್ನಾಟಕ ಸರ್ಕಾರವೇನಿದ್ದರೂ ಹೆಸರಿಗೆ ಮಾತ್ರ, ಅಲ್ಲಿ ನಡೆಯೋದು ರಾಜಭವನದ ದರ್ಬಾರ್. ಅದರೊಂದಿಗೆ ಆ ಭಾಗದಲ್ಲಿ ರಾಶ್ಟ್ರಪತಿ ಆಡಳಿತ ಇನ್ನೊಂದು ಹೆಸರಲ್ಲಿ ಶುರುವಾದಂತಿದೆ.  ಒಂದು ಚೂರು ರೊಟ್ಟಿ ಎಸೆದು ಜನರನ್ನು ಮರಳು ಮಾಡಿ ಇಡೀ ಹೈದರಾಬಾದ್ ಕರ್ನಾಟಕವನ್ನು ಕೇಂದ್ರದ ಹಿಡಿತಕ್ಕೆ ತೆಗೆದುಕೊಳ್ಳುವುದು ಅಂದರೆ ಇದೇ ಏನೋ. ಸ್ವಯಂ ಆಡಳಿತದಲ್ಲಿ ನಂಬಿಕೆ ಇರುವ ಎಲ್ಲ ಕನ್ನಡಿಗರೂ  ಈ ನಾಚಿಕೆಗೇಡಿನ ವಿಷಯವನ್ನು ಖಂಡಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !