ಸೋಮವಾರ, ಅಕ್ಟೋಬರ್ 5, 2009

ಇದಕ್ಕೆಲ್ಲ ಕೊನೆ ಎಂದು ?

ಕರ್ನಾಟಕದ ೧೫ಕ್ಕೂ ಹೆಚ್ಚು ಜಿಲ್ಲೆಗಳು ಹಿಂದೆಂದೂ ಕೇಳರಿಯದ ರೀತಿಯಲ್ಲಿ ನೆರೆಗೆ ತುತ್ತಾಗಿದ್ದು, ಜನ ಮನೆ ಮಠ ಎಲ್ಲ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರ ನೆರವಿಗೆ ತಕ್ಷಣ ಸ್ಪಂದಿಸಬೇಕಾಗಿದ್ದ ರಾಜ್ಯ ಸರ್ಕಾರ ಸುತ್ತೂರು ಮಠದಲ್ಲಿ ಜನಗಳ ಸೇವೆ ಮಾಡೋದು ಹೇಗೆ ಅಂತ ಪಾಠ ಕಲಿತಾ ಇದ್ರಂತೆ. ನೆರೆ ಪೀಡಿತ ಜನರ ನೆರವಿಗೆ ಧಾವಿಸಿ, ಅವರ ಕಣ್ಣೀರು ಒರೆಸೋ practical ಕೆಲಸ ಮಾಡೋದು ಬಿಟ್ಟು, ಅದೇ ಜನಗಳ ಕಷ್ಟ ನಿವಾರಿಸೋದು ಹೇಗೆ ಅಂತ theory ಕಲಿತೀನಿ ಅಂತ ಮಠದಲ್ಲಿ ಕೂತ ಸರ್ಕಾರ, ಜನರ ನೆರವಿಗೆ ಧಾವಿಸೋ ಹೊತ್ತಿಗೆ ಅಲ್ಲಾಗಲೇ ೧೮೦ಕ್ಕೂ ಹೆಚ್ಚು ಜನರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಕಾಲಿಕ ಸಾವಿಗೀಡಾದ ನಮ್ಮ ಅಣ್ಣ-ತಮ್ಮ-ಅಕ್ಕ-ತಂಗಿಯರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸೋಣ.

ಇದೇ ವೇಳೆ, ಕೇಂದ್ರದಲ್ಲಿರುವ ಸರ್ಕಾರ ಕರ್ನಾಟಕದ ಬಗ್ಗೆ ತನಗಿರುವ ಮಲತಾಯಿ ಧೋರಣೆಯನ್ನು ಹೇಗೆ ಮುಂದುವರೆಸಿದೆ ಅನ್ನೋದನ್ನ ಇವತ್ತಿನ DNA ಮತ್ತು ಕನ್ನಡ ಪ್ರಭ ಪತ್ರಿಕೆಗಳ ವರದಿಗಳು ಹೇಳುತ್ತಿವೆ.


















ಅಲ್ಲಾ, ಇಂತಹ ಹೊತ್ತಲ್ಲೂ ಇವರಿಗೆ ರಾಜಕೀಯ ಲಾಭದ್ದೇ ಚಿಂತೆ ಅಂದ್ರೆ ಏನ್ ಹೇಳಬೇಕು. ರಾಜ್ಯದಲ್ಲಿ ೧೫ಕ್ಕೂ ಹೆಚ್ಚು ಜಿಲ್ಲೆಗಳು ನೆರೆಗೆ ತುತ್ತಾಗಿರುವುದು, ೧೮೦ಕ್ಕೂ ಹೆಚ್ಚು ಜನ ಸಾವೀಗಿಡಾಗಿ, ಆಂಧ್ರಕ್ಕಿಂತ ಅತಿ ಹೆಚ್ಚಿನ ನಷ್ಟ ಇಲ್ಲಿ ಆಗಿರುವ data ಕಣ್ಣ ಮುಂದೆ ಇದ್ದರೂ, ಆಂಧ್ರಕ್ಕೆ ಎಲ್ಲ ರೀತಿಯ ನೆರವು, ಕರ್ನಾಟಕಕ್ಕೆ ಬೇಕೋ ಬೇಡವೋ ಅನ್ನೋ ರೀತಿಯ ನೆರವು ಕೊಡ್ತಾ ಇರೋದನ್ನ ನೋಡಿದಾಗ, ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ, ಕನ್ನಡಿಗರ ಹಿತದ ಬಗ್ಗೆ ಅದೇಷ್ಟು ಕಾಳಜಿ ಇದೆ ಅನ್ನುವುದು ಗೊತ್ತಾಗಲ್ವ? ಇದೇ ಬಿ.ಜೆ.ಪಿ ಸರ್ಕಾರ ಕೇಂದ್ರದಲ್ಲಿದ್ದಿದ್ದರೆ ಪರಿಸ್ಥಿತಿ ಬೇರೆಯಾಗೇನು ಇರುತ್ತಿರಲಿಲ್ಲ. ಅವರ ಸರ್ಕಾರಕ್ಕೆ ಆಂಧ್ರದಿಂದ ಯಾರು ಸಪೋರ್ಟ್ ಕೊಡುತ್ತಿದ್ದರೋ, ಅವರ ಅಣತಿಯಂತೆ ಅವರಿಗೆ ಹೆಚ್ಚಿನ ನೆರವು ಸಿಗುತಿತ್ತು. ಕರ್ನಾಟಕಕ್ಕೆ ಯಾವತ್ತು ಚೊಂಬೇ ಗತಿ. ಇದಕ್ಕೆಲ್ಲ ಪರಿಹಾರವೆಂದರೆ, ಕರ್ನಾಟಕದ ಹಿತ ಕಾಯಬಲ್ಲ ಪ್ರಾದೇಶಿಕ ಪಕ್ಷವೊಂದರ ಉದಯ. ಅದು ಆಗೋವರೆಗೂ ಇಂತಹ ಅನ್ಯಾಯ, ಅಸಡ್ಡೆಗಳಿಗೆ ಕೊನೆಯಿಲ್ಲ ಅನ್ನಿಸುತ್ತೆ. ನೀವೇನ್ ಅಂತೀರಾ?

1 ಕಾಮೆಂಟ್‌:

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !